ವಿಷಯಕ್ಕೆ ಹೋಗಿ
ಈ ವರ್ಷ 68ನೇ ಕರ್ನಾಟಕ ರಾಜ್ಯೋತ್ಸವ ಬೆಳಗಾವಿ ಜಿಲ್ಲೆಯಲ್ಲಿ ಹಾಗೂ ಚಿಕ್ಕೋಡಿ ಗಡಿ ಭಾಗದಲ್ಲಿ ಅತಿ ವಿಜ್ರಂಭಣೆಯಿಂದ ನಡೆಯಲಿದೆ. ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂಬ ನಾಮಕರಣ ಮಾಡಿ 50 ವರ್ಷ ಪೂರ್ಣವಾಗಿದೆ ಈ ವರ್ಷ ಪೂರ್ತಿ ಕನ್ನಡ ಕಾರ್ಯಕ್ರಮ ,ಕನ್ನಡ ನಾಡು ನುಡಿ ,ನಾಡಿನ ಇತಿಹಾಸ ಮತ್ತು ಸಂಸ್ಕೃತಿ ಬಿಂಬಿಸುವಂಥ ಕಾರ್ಯಕ್ರಮಗಳು ನಡೆಸಲಾಗುವುದು. ಈ ವರ್ಷ ಬೆಳಗಾವಿ ಹಾಗೂ ಚಿಕ್ಕೋಡಿ ಗಡಿಭಾಗಕ್ಕೆ ಕರ್ನಾಟಕ ಸರಕಾರದಿಂದ ಹೆಚ್ಚಿನ ಅನುದಾನ ನೀಡಿ ಗಡಿ ಭಾಗಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಒತ್ತಾಯಿಸಲಾಗುವುದು. ಈ ಸಂದರ್ಭದಲ್ಲಿ ಸಂಜು ಎಸ್ ಬಡಿಗೇರ ಬೆಳಗಾವಿ ಜಿಲ್ಲಾ ಸಂಚಾಲಕರು, ಚೆನ್ನಪ್ಪ ಬಡಿಗೇರ್ ತಾಲುಕಾ ಮುಖಂಡರು , ಬಸವ ಸಾಜನೆ ,ಯಾಸಿನ್ ಜಮಾದಾರ್ , ಸಂತೋಷ ಪೂಜಾರಿ , ಶುಭ0 ಕದಂ, ಮಾಳು ಕರಿಯನ್ನವರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಎಲ್ಲ ಕಾರ್ಯಕರ್ತರು ಉಪಸ್ಥಿದ್ದರು.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು