ವಿಷಯಕ್ಕೆ ಹೋಗಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರು ಮಲ್ಲಿಕಾರ್ಜುನ್ ಬಂಗ್ಲೆ ಅವರ ಆದೇಶ ಮೇರೆಗೆ ದಿನಾಂಕ 1/ 4 /2024,, ಜಿಲ್ಲಾಧ್ಯಕ್ಷರಾದ ಡಾಕ್ಟರ: ರವಿ ಬಿ ಕಾಂಬಳೆ ಅವರ ನೇತೃತ್ವದಲ್ಲಿ ಅಥಣಿ ತಾಲೂಕ ಕರ್ನಾಟಕ ಪತ್ರಕರ್ತ ಧ್ವನಿ ಸಂಘಟನೆಯ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರನ್ನು ನೇಮಕ ಮಾಡಲಾಯಿತು.ಅಥಣಿ ಗೌರವ ಅಧ್ಯಕ್ಷರಾಗಿ ಲಕ್ಕಪ್ಪ ನಾಯಕ ತಾಲೂಕ ಅಧ್ಯಕ್ಷರಾಗಿ ಅಲ್ಲಾವುದ್ದೀನ್ ಶೇಕ್ ಉಪಾಧ್ಯಕ್ಷರಾಗಿ ಶಶಿಕಾಂತ ಪುಂದಿಪಲ್ಲಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ಧಾರೂಢ ಬಣ್ಣದ, ಕಾರ್ಯದರ್ಶಿ ಲಕ್ಷ್ಮಣ ಮೂಕಿ, ಖಜಾಂಚಿ ಉಮರ್ ಮೋಮಿನ್, ಸದಸ್ಯರು ಸಂತೋಷ ಹೋಣಕಾಂಡೆ, ಅಜಯ ಕಾಂಬಳೆ, ರಶಿದ ಶೆಕ್ ಅವರನ್ನ ನೇಮಕ ಮಾಡಲಾಯಿತು.ತದನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷ ಡಾಕ್ಟರ್: ರವಿ ಬಿ ಕಾಂಬಳೆ ಅವರು ನಮ್ಮ ಸಂಘಟನೆ ರಾಜ್ಯಾಧ್ಯಂತ ಒಳ್ಳೆ ಒಳ್ಳೆ ಕಾರ್ಯಗಳನ್ನು ಕೈಗೊಂಡು ಯಶಸ್ವಿ ಆಗಿದೆ. ಹಾಗೂ ಯಾವುದೇ ರೀತಿಯ ಪತ್ರಕರ್ತರಿಗೆ ತೊಂದರೆ ಆದರೆ ಹೋರಾಟಕ್ಕೆ ಇಳಿದು ಅದನ್ನ ಸರಿ ದಾರಿಗೆ ತರುವಂತ ಕೆಲಸ ಮಾಡೋದು, ಯಾವುದಾದರೂ ಸಂಘಟನೆ ಇದ್ದರೆ ಅದು ನಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಎಂದು ಜಿಲ್ಲಾಧ್ಯಕ್ಷರು ಹೇಳಿದರು.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು