.ಸಮೃದ್ಧ ಸಂಸ್ಕೃತಿಯನ್ನು ಹೊಂದಿರುವ ಹಾಗೂ ಪ್ರಪಂಚದ ಅತಿ ದೊಡ್ಡ ಗಣ ಜನತಂತ್ರ ಸಂವಿಧಾನ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಹೃದಯವೇ ಪ್ರಜೆಗಳು. ಚುನಾವಣೆ ಮತ್ತು ಮತದಾನ ಇವು ಒಂದೇ ನಾಣ್ಯದ ಎರಡು ಮುಖಗಳು ಚುನಾವಣೆ ಪ್ರಕ್ರಿಯೆಯು ಪರಿಪೂರ್ಣವಾಗುವುದು ಮತದಾರರಿಂದ ಮತ ಚಲಾಯಿಸುವುದರಿಂದ.ಜಾತಿ,ಲಿಂಗ, ಧರ್ಮ, ಸಾಮಾಜಿಕ ಸ್ಥಾನ - ಮಾನ ಮುಂತಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೆ ಈ ಭಾರತ ದೇಶದಲ್ಲಿ 18 ವರ್ಷ ಪೂರ್ಣಗೊಂಡ ಎಲ್ಲ ವಯಸ್ಕ ಪ್ರೌಢ ಪ್ರಜೆಗಳಿಗೆ ಮತ ಚಲಾಯಿಸುವ ಹಕ್ಕು ನಮ್ಮ ದೇಶದ ಹೃದಯ ಎನಿಸಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ರವರ ರಚಿತ ಭಾರತದ ಸಂವಿಧಾನದಲ್ಲಿ ನೀಡಲಾಗಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಮ್ಮ ಭಾರತ ದೇಶ ಪ್ರಜೆಗಳೇ ದೇವರುಗಳು ಪ್ರಭುಗಳೇ ಪೂಜಾರಿಗಳು ಎಂಬ ಮಾತನ್ನು ಎಲ್ಲರೂ ತಿಳಿದುಕೊಂಡು ಮತದಾನದ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಪ್ರತಿ 5 ವರ್ಷಕ್ಕೊಮ್ಮೆ ಬರುವ ಈ ಚುನಾವಣೆಯ ಪರ್ವದಲ್ಲಿ ಮತದಾನ ಪ್ರಭುಗಳು ಮೊದಲು ಬುದ್ಧಿವಂತರಾಗಬೇಕು ಆದರೆ ಈ ಬುದ್ಧಿವಂತಿಕೆ ಬರುವುದು ದೇವರ ಅನುಗ್ರಹದಿಂದಲ್ಲ ಹೊರತು ಶಿಕ್ಷಣದಿಂದ ಮೊಟ್ಟ ಮೊದಲು ನಾವೆಲ್ಲರೂ ಶಿಕ್ಷಣ ಪಡೆಯಬೇಕು ಶಿಕ್ಷಣ ವೆಂಬ ಚಿಲುಮೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಚಿಂತನ ಮಂಥನ ನ್ಯಾಯ - ಅನ್ಯಾಯ ವರೆಗೆ ಹಚ್ಚಲು ಒಂದು ಅದ್ವಿತೀಯ ಜ್ಞಾನ ನೀಡುತ್ತದೆ ಈ ದೇಶದ ಭವಿಷ್ಯವನ್ನು ಬರೆಯುವುದು ದೇವ ದೇವತೆಗಳಲ್ಲ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಿದೆ ರಾಷ್ಟ್ರದ ಬಹುತೇಕ ಮತದಾರರು ಪೂರ್ವಾಗ್ರಹ ಪೀಡಿತರಾಗಿ ಮತದಾನ ಮಾಡುತ್ತಲೇ ಬಂದಿರುವುದು ಒಂದು ವಿಪರ್ಯಾಸದ ಸಂಗತಿಯಾಗಿದೆ ಕಾಟಾಚಾರಕ್ಕೆ ಮತದಾನ ಮಾಡದೆ ವಿವೇಚನೆಯಿಂದ ಮತ ಚಲಾಯಿಸಬೇಕು ನಮ್ಮ ಒಂದು ಮತ ಚಲಾಯಿಸದಿದ್ದರೆ ದೇಶವೇನೋ ಹಾಳಾಗುವುದಿಲ್ಲ ಎಂಬೆಂತಹ ಉಡಾಫೆಯನ್ನು ಬಿಟ್ಟು ನಮಗೆ ಯೋಗ್ಯ ಅನಿಸಿರುವ ಅಭ್ಯರ್ಥಿಗೆ ಮತ ಹಾಕಿ ನಮ್ಮ ಅಮೂಲ್ಯ ಹಕ್ಕನ್ನು ಸಾರ್ಥಕ ಪಡಿಸಿಕೊಳ್ಳೋಣ.ವಾಸ್ತವ ಸತ್ಯ ಚುನಾವಣಾ ಅಖಾಡಕ್ಕೆ ಇಳಿಯುವ ಇಂದಿನ ನಾಯಕರು ಇತ್ತೀಚಿನ ಚುನಾವಣೆಗಳಲ್ಲಿ ಮತದಾರರನ್ನು ತಮತ್ತ ಸೆಳೆಯಲು ತೆರೆ ಮೆರೆಯಲ್ಲಿ ಅನೇಕ ಕಸರತ್ತುಗಳನ್ನು ಮಾಡಿ ವಸ್ತು, ಆಭರಣ, ಗರಿ-ಗರಿ ನೋಟು ಸಾರಾಯಿ ಪ್ಯಾಕೆಟ್ಟುಗಳನ್ನು ಕೊಟ್ಟು ಮತದಾರ ಪ್ರಭುಗಳನ್ನು ತಾತ್ಕಾಲಿಕವಾಗಿ ತೃಪ್ತಿಗೊಳಿಸುವ ಕಾರ್ಯ ಮಾಡುತ್ತಾರೆ ವಿನಹ ಇಲ್ಲಿ ಮತದಾರ ಪ್ರಭುಗಳು ಸ್ವಲ್ಪ ಆಲೋಚನೆ ಮಾಡಬೇಕು ಹಳ್ಳಿಗಳು ಸಮೃದ್ಧಿಯನ್ನು ಕಾಣಬೇಕಾದರೆ ಯೋಗ್ಯ ವ್ಯಕ್ತಿಗೆ ಮತ ಹಾಕುವ ದೃಢ ನಿರ್ಧಾರ ಮಾಡಬೇಕು ಇತ್ತೀಚಿಗೆ ಈ ಜಾತ್ಯಾತೀತ ರಾಷ್ಟ್ರದಲ್ಲಿ ನಾಯಕರಾಗಲು ಹೊರಟವರು ಜಾತಿಯ ಆಧಾರದ ಮೇಲೆ ಮತದಾರರ ಮೇಲೆ ಪ್ರಭಾವ ಬೀರಿ ಮತ ನೀಡಬೇಕು ಎಂದು ಪ್ರೇರೇಪಿಸುವ ಕಾರ್ಯ ಮಾಡುತ್ತಿರುವದೂ ಅತ್ಯಂತ ವಿಷಾದನೀಯ ಪ್ರಜಾಪ್ರಭುತ್ವದ ಕಗ್ಗೊಲೆಯ ಸಂಗತಿಯಾಗಿದೆ.ಪ್ರಸ್ತುತ ಭಾರತ ದೇಶದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಲವು ಹಂತಗಳಲ್ಲಿ ಮುಹೂರ್ತ ನಿಗದಿಯಾಗಿದೆ ಮತದಾನವೆಂಬುದು ನಮ್ಮ ಪವಿತ್ರ ಹಕ್ಕು ಸುಸಂಸ್ಕೃತ ಸಮೃದ್ಧ ಯೋಗ್ಯತೆ ಇರುವ ವ್ಯಕ್ತಿಗೆ ನಮ್ಮ ಅಮೂಲ್ಯ ಮತ ನೀಡಿ ಮತದಾನದ ಹಕ್ಕನ್ನು ಸಫಲತೆ ಮಾಡಿಕೊಳೋಣ ನಮ್ಮ ಒಂದು ಮತ ಕೋಟಿ ಕೋಟಿ ರೂಪಾಯಿಗಿಂತಲೂ ಅಮೂಲ್ಯವಾದದ್ದು ಅದಕ್ಕೆ ಬೆಲೆ ಕಟ್ಟಲಾಗದು. ಮತದಾರರು ತಮ್ಮ ಆತ್ಮಸಾಕ್ಷಿಯಾಗಿ ಸ್ವಯಂ ಪ್ರೇರಿತರಾಗಿ ನಿಗದಿಪಡಿಸಿದ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಿ ಬರಬೇಕು ಮತ ಹಾಕುವ ಪೂರ್ವದಲ್ಲಿ ಮತದಾರರಿಗೆ ಪಕ್ಷ ನಿಷ್ಠೆ ಹಾಗೂ ವ್ಯಕ್ತಿ ನಿಷ್ಠೆ ಕಾಡುವುದು ಸಹಜ ಈ ಸಂದರ್ಭದಲ್ಲಿ ನಿಮಗೆ ಸರಿ ಎಂದೇನಿಸಿದ ಯೋಗ್ಯ ಅಭ್ಯರ್ಥಿಗೆ ಮತ ನೀಡಿ ಅಥವಾ ನಿಮಗೆ ಪಕ್ಷನಿಷ್ಠೆ ಹಾಗೂ ವ್ಯಕ್ತಿ ನಿಷ್ಠೆ ಬೇಡ ಎನಿಸಿದರೆ ನೋಟಾಗೆ ಮತ ನೀಡಿ ಈ ಮೂಲಕ ತಿರಸ್ಕಾರ ಮಾಡುವ ಅನುಕೂಲತೆಯನ್ನು ಚುನಾವಣಾ ಆಯೋಗ ನೀಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ ನನ್ನ ಒಂದು ಮತ ಹಾಕದಿದ್ದರೆ ನಡೆಯುತ್ತದೆ ಎಂದುಕೊಂಡು ಮನೆಯಲ್ಲಿ ಕುಳಿತು ಉದಾಸೀನ ಮಾಡದೆ, ಮತದಾನದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ನಿಷ್ಠೆ ಪ್ರಾಮಾಣಿಕವಾಗಿ ಪಾಲ್ಗೊಂಡು ದೇಶದ ಹಿತ ಕಾಪಾಡುವ ಸುಸಂಸ್ಕೃತ ಸಮೃದ್ಧ ನಿಷ್ಠಾವಂತ ಪ್ರಾಮಾಣಿಕ ಕ್ರಿಯಾಶೀಲ ಪ್ರಜೆಗಳ ಪ್ರೀತಿ-ವಿಶ್ವಾಸ ಸಂಪಾದಿಸುವ ಜಾತ್ಯತೀತ ಜನಪರ ಕಾಳಜಿ ಹೊಂದಿರುವ ಕರುಣಾಮಯಿ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನ ಮಾಡುವ ಸಮರ್ಥ ವ್ಯಕ್ತಿಗೆ ಹಾಗೂ ಸಂವಿಧಾನದ ಆಶಯಗಳಿಗೆ ಬದ್ಧರಿರುವ ವ್ಯಕ್ತಿಗೆ ಮತ ನೀಡುವ ಮೂಲಕ ಈ ನಾಡು ಕಲ್ಯಾಣ ಕರ್ನಾಟಕವಾಗಲು ಹಾಗೂ ಈ ವಿಶಾಲವಾದ ರಾಷ್ಟ್ರವೂ ಪ್ರಭುದ್ಧ ರಾಷ್ಟ್ರವಾಗಲು ಕಾರಣಿ ಕರ್ತರಾಗಬೇಕು."ನಾನು ನಿಮಗೆ ಮತದಾನದ ಅಧಿಕಾರ ಕೊಡಿಸಿದ್ದು ರಾಜರಾಗಲು ಹೊರತು ಗುಲಾಮರಾಗಿ ಎಂದಲ್ಲ" ಸಂವಿಧಾನ ಶಿಲ್ಪಿ, ವಿಶ್ವ ರತ್ನ, ಭಾರತರತ್ನ, ಡಾ ಬಿ ಆರ್ ಅಂಬೇಡ್ಕರ್ ನುಡಿಯನ್ನು ಪ್ರತಿಯೊಬ್ಬ ಭಾರತೀಯನು ಚಿಂತನ-ಮಂಥನ ಮಾಡಬೇಕು ರಾಜನಾಗುವುದು ಗುಲಾಮನಾಗುವುದು ನಮ್ಮ ಕೈಯಲ್ಲಿದೆ ವ್ಯಕ್ತಿಯನ್ನು ಆಯ್ಕೆ ಮಾಡುವ ಮುನ್ನ ಆಳವಾಗಿ ಆಲೋಚಿಸಬೇಕು ಭ್ರಷ್ಟ - ದುಷ್ಟರನ್ನು ದೂರಿಡಿ ಒಳ್ಳೆಯವರಿಗೆ ಮೊದಲ ಆದ್ಯತೆಯನ್ನು ಕೊಟ್ಟು ಆಯ್ಕೆ ಮಾಡಿದರೆ ನಮಗೂ ಹಿತ ನಾಡಿಗೂ ಹಿತ ದೇಶಕ್ಕೂ ಹಿತ ಹೀಗೆ ನಾವೆಲ್ಲರೂ ಮಾಡುವುದರಿಂದ ಪ್ರಜಾಪ್ರಭುತ್ವದ ಮೌಲ್ಯಗಳು ಗಟ್ಟಿಗೊಳ್ಳುವುದರಲ್ಲಿ ಎರಡು ಮಾತಿಲ್ಲ " ಮತ ಮನೆಮಗಳು ಇದ್ದಂತೆ ಅದನ್ನು ಅಯೋಗ್ಯರಿಗೆ ಕೊಡಬಾರದು " ಇದು ಡಾ. ಬಿ. ಆರ್. ಅಂಬೇಡ್ಕರರ ಉಕ್ತಿ ಮತ್ತು ಮಾತು ಈ ನಿಟ್ಟಿನಲ್ಲಿ ಪ್ರಜೆಗಳು ಪ್ರಜ್ಞಾವಂತರಾಗಬೇಕು ಪ್ರಭುದ್ಧರಾಗಬೇಕು ಬುದ್ಧಿವಂತರಾಗಬೇಕು ಭೀಮರಾವ್ ಅಂಬೇಡ್ಕರ್ ಅವರು ಹೇಳಿದ ಈ ಅಮೂಲ್ಯ ಉಕ್ತಿಯನ್ನು ಅರ್ಥ ಮಾಡಿಕೊಂಡು ಮತ ಮೌಲ್ಯದ ಮಹತ್ವ ಮನಗಂಡು ಮತದಾನ ಮಾಡೋಣ ಪ್ರಜಾಪ್ರಭುತ್ವ ಬಲಗೊಳ್ಳಲು ನಾವೆಲ್ಲರೂ ಪರಿಶ್ರಮಿಸೋಣ ಕೈಜೋಡಿಸೋಣ.ಲೇಖನ - ರಮೇಶ ಕಾಂಬಳೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಕ್ಕೇರಿ : ಜುಲೈ 29 – ಹುಕ್ಕೇರಿ ತಾಲೂಕಿನ ಶಿಂದಿಹಟ್ಟಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಮನೆ ಸುಟ್ಟು ಸುಮಾರು ₹25 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ರಾಮಪ್ಪ ಲಕ್ಷ್ಮಣ ಮಗದುಮ್ಮ ಅವರ ಮನೆಗೆ ಈ ದುರ್ಘಟನೆ ಸಂಭವಿಸಿದ್ದು, ಕುಟುಂಬ ಸಂಪೂರ್ಣವಾಗಿ ಬೀದಿಗೆ ಬಿದ್ದಿದೆ ಎಂದು ನೊಂದವರು ದೂರಿದ್ದಾರೆ.ಘಟನೆಯು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಸ್ಥಳೀಯರ ಆಕ್ರೋಶ. "ಇನ್ನಾದರೂ ಅಧಿಕಾರಿಗಳು ನೊಂದವರಿಗೆ ನೆರವಾಗಬೇಕು," ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ. ಕಾಂಬಳೆ ಅವರು ಖಂಡಿಸಿದ್ದಾರೆ.ಈ ವಿಚಾರ ತಿಳಿದ ಧ್ವನಿ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ಸ್ಥಳಕ್ಕೆ ತಕ್ಷಣ ದೌಡಾಯಿಸಿ ನೊಂದ ಕುಟುಂಬಕ್ಕೆ ದಿನಸಿ, ಬಟ್ಟೆ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿ ಧೈರ್ಯ ತುಂಬಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ರವಿ ಬಿ ಕಾಂಬಳೆ, ತಾಲೂಕಾ ಉಪಾಧ್ಯಕ್ಷ ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ ಹಾಗೂ ಖಜಾಂಚಿ ಮಹಾಂತೇಶ ಬೇವಿಕಟ್ಟಿ ಉಪಸ್ಥಿತರಿದ್ದರು. ವರದಿ : ಸಂತೋಷ್ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಮಾದಿಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಒಂದೇ ದಿನದಲ್ಲಿ ಎರಡೆರಡು ಕಾರ್ಯಕ್ರಮ ಗಳನ್ನು ನಡೆಸಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವ ಮದಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿ ವರ್ಗ ಸರ್ವ ಸದಸ್ಯ ಮಂಡಳಿ ಮೊದಲನೆಯದ್ದು "ಜಮಾಬಂದಿ ಕಾರ್ಯಕ್ರಮ" ಎರಡನೆಯದು "ಕಾವಲು ಸಮಿತಿ ಸಭೆ" ಹೀಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮದಿಹಳ್ಳಿ ಗ್ರಾಮವನ್ನು ಅಭಿವೃದ್ಧಿಯ ಹಾದಿಯತ್ತ ಕರೆದೊಯ್ಯಲು ಶ್ರಮಿಸುತ್ತಿರುವ ಮಾದಿಹಳ್ಳಿ ಗ್ರಾಮ ಪಂಚಾಯತ ಆಡಳಿತ ಮಂಡಳಿ ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ತಳವಾರ, ಅಧ್ಯಕ್ಷರಾದ ಲಕ್ಕವ್ವ ಬಾಗಿ, ಉಪಾಧ್ಯಕ್ಷರಾದ ಕೋಮಲ್ ಹೊಸಮನಿ, ಪಶು ವೈದ್ಯಾಧಿಕಾರಿ ರಮೇಶ್ ಕದಮ, ಅಂಗನವಾಡಿ ಮೇಲ್ವಿಚಾರಕರು ಜಿ. ಎನ್. ಮಾನಗಾವಿ, ಸದಸ್ಯರಾದ ಮಾನಿಕ ಬಾಗಿ, ಗಣಪತಿ ವಾಳಕಿ, ಕಾಶಪ್ಪ ಮುತಗಿ, ಶಿವಾಜಿ ಗಾಡಿವಡ್ಡರ, ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ವರದಿ : ಸಂತೋಷ ಪಾಟೀಲ್, ಹುಕ್ಕೇರಿ.

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮ ಪಂಚಾಯತ ಸಭಾ ಭವನ ಕಟ್ಟಡ ಉದ್ಘಾಟನಾ ಸಮಾರಂಭ ಜರಗಿತು 15ನೇ ಹಣಕಾಸು ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯತ್ ಸಭಾ ಭವನ ಕಟ್ಟಡದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಹೈಷಿಕೇಶಾನಂದ ಬಾಬು ಮಹಾರಾಜರು ಮದಿಹಳ್ಳಿ ಹಾಗೂ ಶ್ರೀ ವಾಮನದೇವರು ಮದಿಹಳ್ಳಿ ಉದ್ಘಾಟಕರಾದ ಶ್ರೀ ಟಿ ಆರ್ ಮಲ್ಲಾಡದ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಹುಕ್ಕೇರಿ ಹಾಗೂ ಶ್ರೀಮತಿ ಲಕ್ಕವ್ವ ಬಾಳಪ್ಪ ಬಾಗಿ ಅಧ್ಯಕ್ಷರು ಗ್ರಾಮ ಪಂಚಾಯತ ಮುದಿಹಳ್ಳಿ ಶ್ರೀಮತಿ ಕೋಮಲ ಬಸವರಾಜ್ ಹೊಸಮನಿ ಉಪಾಧ್ಯಕ್ಷರು ಹಾಗೂ ಶ್ರೀ ಸುರೇಶ್ ತಳವಾರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮದಿಹಳ್ಳಿ ಇವರ ಅಮೃತ ಹಸ್ತದಿಂದ ಉದ್ಘಾಟನಾ ಸಮಾರಂಭ ಜರುಗಿತು ಈ ಸಮಾರಂಭದಲ್ಲಿ ಶ್ರೀಮತಿ ಲಕ್ಕವ್ವಾ ಬಾಳಪ್ಪ ಬಾಗಿ ಅಧ್ಯಕ್ಷರು. ಸದಸ್ಯರಾದ ಹಸನ್ ರಾಜೇಸಾಬ್ ಸನದಿ. ಶ್ರೀ ಶಿವಾಜಿ ಶೆಟ್ಟೆಪ್ಪ ಗಾಡಿವಡ್ಡರ್. ಶ್ರೀ ಕಾಶಿನಾಥ್ ಓಮಣ್ಣಾ ಮುತಗಿ. ಸದ್ದಾಂ ಮಲಿಕ್ ಬಳಿಗಾರ. ಗಣಪತಿ ಮುರಾರಿ ವಾಳಕಿ. ಶ್ರೀಮತಿ ಶೋಭಾ ಶಿವಾನಂದ ಖಾನಾಪುರಿ. ಶ್ರೀಮತಿ ಶಂಕರವ್ವ ಬೋರಪ್ಪ ತಳವಾರ. ಶ್ರೀಧರ್ ಕಾಡಪ್ಪ ಚೌಗಲಾ. ಕೆಂಪಣ್ಣಾ ಚೌಗಲಾ. ಸತ್ಯಪ್ಪ ಶಿವಲಿಂಗ ಮಾದರ. ಗುರುಸಿದ್ಧ ಬಸವವಂತ ಹಿಡಕಲ್. ಶ್ರೀಮತಿ ದಾನಮ್ಮ ರಮೇಶ್ ಆಲಗೂರಿ. ಶ್ರೀಮತಿ ಶಿವಕ್ಕಾ ಪುಂಡಲೀಕ. ಶ್ರೀಮತಿ ಯಲ್ಲವ್ವ ಮಾರುತಿ ಕುರುಬರ. ರವೀಂದ್ರ ಬಾಬು ಚಾಗಲಾ. ಭೀಮ್ ಸೇನ್ ಬಾಗಿ.ಡಾ.ಕಾಡೇಶ ಹೊಸಮನಿ. ಅಂಬರೀಶ್ ಬನ್ನಕಗೋಳ. ಮಲ್ಲಿಕಾರ್ಜುನ್ ಗೋಟೂರಿ. ಸಂತೋಷ್ ಪಾಟೀಲ್. ಸದಾ ಬಾಗಿ. ಮಲ್ಲಪ್ಪ ಮಾಣಗಾವಿ. ಸುಲ್ತಾನ್ ಸನದಿ. ಶಿವಪ್ಪ ಮುತ್ತಗಿ. ಸಂಜು ಗಾಯಕವಾಡ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನಿ. ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಮದಿಹಳ್ಳಿ ಶಿರಗಾಂವ ಎಸ್ ಡಿ ಎಮ್ ಸಿ ಅಧ್ಯಕ್ಷರು ಸರ್ವ ಸದಸ್ಯರು ಮದಿಹಳ್ಳಿ ಮತ್ತು ಶಿರಗಾವ್ ಗ್ರಾಮದ ಊರಿನ ಗುರು ಹಿರಿಯರು ಮುಖಂಡರು ಮಹಿಳೆಯರು ಉಪಸ್ಥಿತರಿದ್ದರು. ವರದಿ : ಸಂತೋಷ ಪಾಟೀಲ್, ಹುಕ್ಕೇರಿ.