ವಿಷಯಕ್ಕೆ ಹೋಗಿ
ಕರ್ನಾಟಕ ಸಂಸ್ಕೃತಿ ಹಾಗೂ ಸಾಹಿತ್ಯ ಪರಿಷತ್ತು (ರಿ) ಅಧ್ಯಕ್ಷರು ಹಾಗೂ ಸಂಸ್ಥಾಪಕರಾದ ಡಾಕ್ಟರ್ ಶ್ರೀ ಕಸ್ತೂರಿ ಚಂದ್ರು ಇವರ ಮೊದಲನೇ ವರ್ಷದ ವಾರ್ಷಿಕೋತ್ಸವ ಸಾಧಕರಿಗೆ ಸನ್ಮಾನ ಸಮಾರಂಭ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಶ್ರೀ ಇಳ್ಳೆ ಅಳ್ವರ ಸ್ವಾಮೀಜಿ ವoಗಿಪುರ್ ನಂದಿಮಠ ಮೇಲುಕೋಟೆ, ಡಾಕ್ಟರ್ ಅನು ಅಮ್ಮ ಧರ್ಮ ಶ್ರೀಗಳು ಶಕ್ತಿ ಸ್ವರೂಪ ರೇಣುಕಾ ಎಲ್ಲಮ್ಮ ದೇವಸ್ಥಾನ ದೊಡ್ಡಬಳ್ಳಾಪುರ, ಡಾಕ್ಟರ್ ರಘು ರಾಮ್ ವಾಜಪೇಯಿ ಸಮಾಜ ಸೇವಕರು ಮೈಸೂರು, ಡಾಕ್ಟರ್ ರಾಯಲ್ ಗುರುಮೂರ್ತಿ, ಬೆಂಗಳೂರು, ಡಾಕ್ಟರ್ ರವಿಕುಮಾರ್ ವೈ ಜೆ ಮುತ್ತಿಕೆರೆ, ಇವರ ಆಶೀರ್ವಾದ ಹಾಗೂ ಸಮ್ಮುಖದಲ್ಲಿ ಕರ್ನಾಟಕ ರಾಜ್ಯದ ಹಲವು ಕ್ಷೇತ್ರಗಳು ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯ ಸಾಧಕರಿಗೆ ಕರ್ನಾಟಕ ರತ್ನಶ್ರೀ ಶ್ರೇಷ್ಠ ರಾಜ್ಯ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ಪುರಭವನ ಮೈಸೂರಿನಲ್ಲಿ ನೆರವೇರಿತು ಈ ಸ್ವಾಗತ ಸಮಾರಂಭ ಕುರಿತು ಚಿಕ್ಕೋಡಿ ಹಿರಿಯ ಪತ್ರಕರ್ತರಾದ ರಾಜು ಮುಂಡೆಯವರು ಮಾತನಾಡಿದರು.ಈ ಕಾರ್ಯಕ್ರಮದ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದ ಸಂಸ್ಕೃತಿಕ ನೃತ್ಯ ಕಾರ್ಯಕ್ರಮ ನಂತರ ಕರ್ನಾಟಕ ಪ್ರಖ್ಯಾತ ಕಲಾವಿದರಿಂದ "ಗಿಚ್ಚಿ ಗಿಲಿ ಗಿಲಿ" ಹಾಸ್ಯ ನಾಟಕ ದೊಂದಿಗೆ ಕಾರ್ಯಕ್ರಮ ಮುಂದುವರೆದು ಕರ್ನಾಟಕದ ಹಲವು ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿದ ಸಂದರ್ಭದಲ್ಲಿ ನಮ್ಮ ಚಿಕ್ಕೋಡಿ ತಾಲೂಕಿನ ಹಿರಿಯ ಪತ್ರಕರ್ತರು ಹಾಗೂ ಭಾರತ ವೈಭವ ವಾಹಿನಿಯ ವಿಶೇಷ ಕರ್ನಾಟಕ ರಾಜ್ಯ ವರದಿಗಾರರಾದ ಶ್ರೀ ರಾಜು ಮುಂಡೆ ಅವರಿಗೆ ಕರ್ನಾಟಕ ರತ್ನ ಶ್ರೀ ಶ್ರೇಷ್ಠ ರಾಜ್ಯ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ರಾಜು ಮುಂಡೆ ಇವರು ಸುಮಾರು ವರ್ಷಗಳಿಂದ ಪತ್ರಿಕಾ ಉದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಹಲವಾರು ಜನರಿಗೆ ಸ್ಪಂದಿಸುತ್ತಾ ಸಮಾಜದಲ್ಲಿರುವ ಅಂಕು ಡೊಂಕು ತಮ್ಮ ಬರಹದ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸೇವೆಯನ್ನು ಸಾಲಿಸುತ್ತಾ ಬಂದಿದ್ದಾರೆ.ಉನ್ನತ ಸ್ಥಾನದಲ್ಲಿ ಅವರು ಕೆಲಸ ಮಾಡುತ್ತಿದ್ದು ಅವರ ಕಾರ್ಯ ಮತ್ತು ಸ್ವಾಭಿಮಾನ ಸೇವೆಯನ್ನು ಮೆಚ್ಚಿಕೊಂಡು ಅವರಿಗೆ ದಿನಾಂಕ 31 3 2024 ರಂದು ಮೈಸೂರು ಪೂರ್ವ ಭವನದಲ್ಲಿ ಸಹಸ್ರಾರು ಜನರ ಸಮಕ್ಷಮ ಕರ್ನಾಟಕ ರತ್ನ ಶ್ರೀ ಶ್ರೇಷ್ಠ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಪುರಸ್ಕಾರ ಅವರ ಬಂಧು ಬಳಗ ಹಾಗೂ ಮಿತ್ರರಲ್ಲಿ ಸಂತಸದ ಭಾವನೆಗಳನ್ನು ಮೂಡಿಸಿದೆ ಇನ್ನು ಮುಂದೆ ಅವರ ಉಳಿದ ಆಯಸ್ಸಿನಲ್ಲಿ ಇದೇ ರೀತಿಯಾಗಿ ಸಮಾಜ ಸೇವೆಯನ್ನು ಮಾಡುತ್ತ ಇರಲಿ ಎಂದು ಭಾವಿಸೋಣ. ವರದಿ :- ಮೋಸಾ ನದಾಫ್, ಚಿಕ್ಕೋಡಿ.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು