ವಿಷಯಕ್ಕೆ ಹೋಗಿ
ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಹಲವಾರು ಸಹಜ ಹೆರಿಗೆಗಳು ಹಾಗೂ ಸಿಜೆರಿಯನಗಳು ಆಗಿವೆ, ಆದರೆ ಬೆಳಗಾವಿಯ ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆಯ ಅಧಿಕಾರಿ ಸಿಜೇರಿಯನ್ ಬಂದ ಬಗ್ಗೆ ತಿಳಿದು ಬಂದ ಕಾರಣ, ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ಅಶ್ಪಾಕ್ ಸಯ್ಯದ ಇವರ ನೇತೃತ್ವದಲ್ಲಿ , ತಾಯಿ ಮಕ್ಕಳ ಆಸ್ಪತ್ರೆಯ ಎದುರಿಗೆ ಪ್ರತಿಭಟನೆ ನಡೆಸಿದರು.ಈ ಸಂಧರ್ಭದಲ್ಲಿ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಪ್ರಕಾಶ ಹುಕ್ಕೇರಿ ಮತ್ತು ಗಣೇಶ ಹುಕ್ಕೇರಿ ಇವರಿಂದ ಸುಮಾರು 28 ಕೋಟಿ ಹೆಚ್ಚು ಖರ್ಚು ಮಾಡಿ, ಕಟ್ಟಸಿರುವ ಈ ಆಸ್ಪತ್ರೆಯಲ್ಲಿ ಬಡವರಿಗೆ ಸಮರ್ಪಕವಾಗಿ ಕೆಲಸ ಮಾಡಬಾರದು, ಆದರೆ ತಮ್ಮ ಖಾಸಗಿ ಆಸ್ಪತ್ರೆಯ ವ್ಯವಹಾರ ಕುಂಟಿತವಾಗುತ್ತಿರುವ ವಿಚಾರದಿಂದ, ಮೇಲಾಧಿಕಾರಿಗಳು ಈ ನೂತನ ಆಸ್ಪತ್ರೆಯಲ್ಲಿ ಸಿಜೆರಿಯನ್ ಮಾಡುವುದನ್ನು ಸ್ಥಗಿತಗೊಳಿಸಿದ್ದು ಕಂಡು ಬಂದಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ, ಕೂಡಲೇ ಇಲ್ಲಿ ಪುನ ಸಿಜೇರಿಯನ್ ಮಾಡುವುದನ್ನು ಪ್ರಾರಂಭಿಸಬೇಕು ಮತ್ತು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಹಿತದೃಷ್ಟಿಯಿಂದ, ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸಬೇಕೆಂದು ಹೇಳಿದರು.ಸಂಜು ಬಡಿಗೇರ ಮಾತನಾಡಿ, ಸರಕಾರದವರು ಬಡವರಿಗೆ ಸಹಾಯವಾಗಲಿ ಎಂದು ಇಷ್ಟೊಂದು ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿ, ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ, ಆದರೆ ಕೆಲವು ಆರೋಗ್ಯ ಅಧಿಕಾರಿಗಳು ತಂತ್ರ ಕುತಂತ್ರದಿಂದ ಆಸ್ಪತ್ರೆಗೆ ಬಂದ ಷಡಯಂತ್ರ ನಡೆದಿದೆ, ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ, ಕೂಡಲೇ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕ ಮಾಡಿ ಸಿಜೆರಿಯನ್ ಆರಂಭ, ಬಡ ಜನರಿಗೆ ಅನುಕೂಲವಾಗಬೇಕು, ಇಲ್ಲದಿದ್ದಲ್ಲಿ ನಾವುಗಳು ರಸ್ತೆಗಿಳಿದು ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ಹೋರಾಟ ಮಾಡ್ತೀವಿ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಚಿಕ್ಕೋಡಿ ಉಪವಿಭಾಗೀಯ ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಆರೋಗ್ಯ ಇಲಾಖೆಯ ದುಷ್ಟ-ಭ್ರಷ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಪ್ಪಿಸ್ಥಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ಸಂಧರ್ಭದಲ್ಲಿ ಬಸವರಾಜ ಸಾಜನೆ, ಅಮೂಲ ನಾವಿ, ರಫೀಕ್ ಪಠಾಣ, ಖಾನಪ್ಪ ಬಾಡಕರ, ಸಚೀನ ದೊಡ್ಡಮನಿ, ಮಾಳು ಕರೆಣ್ಣವರ, ಸಂಜು ಕರೆಣ್ಣವರ, ಸಿದ್ರಾಮ ಕರಗಾಂವೆ, ಅಪ್ಪಾಸಾಹೇಬ ಹಿರೇಕೋಡಿ, ರಾಹುಲ್ ವಾಳಕೆ, ವಿಜಯ ಬ್ಯಾಲೆ, ಪ್ರಮೋದ್ ಪಾಟೀಲ್, ಸಚಿನ್ ಬುರುಡ, ಗಜಾನನ ಖಾಪೆ, ಕನ್ನಡಪರ ಹೋರಾಟಗಾರರು.ವರದಿ : ರಮೇಶ ಕಾಂಬಳೆ ಚಿಕೋಡಿ.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು