ವಿಷಯಕ್ಕೆ ಹೋಗಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೂಡಿ ಗ್ರಾಮದ ಮುರಾರ್ಜಿ ಶಾಲೆಯಲ್ಲಿ ದೋಷಿತ ಆಹಾರ ಸೇವಿಸಿ ಮಕ್ಕಳು ಅಸ್ತವ್ಯಸ್ತರಾಗಿದ ಘಟನೆ ಖಂಡಿಸಿ. ಘಟನೆಗೆ ಸಂಬಂಧಪಟ್ಟ ಶಾಲಾ ಅಡುಗೆ ಸಿಬ್ಬಂದಿ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲು ಕರ್ನಾಟಕ ರಕ್ಷಾಣಾ ವೇದಿಕೆ ಹಿರೇಕೊಡಿ ಗ್ರಾಮ ಘಟಕದ ಕಾರ್ಯಕರ್ತರು ಶಾಲಾ ಪ್ರಾಂಶುಪಾಲರಿಗೆ ಮನವಿ ಕೊಟ್ಟು ಸಂಬದಿಸಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದರು.ಮಕ್ಕಳ ಜೀವದ ಜೋತೆ ಆಟ ಆಡುತ್ತಿರುವ ಜವಾಬ್ದಾರಿ ರಹಿತ ಸಿಬ್ಬಂದಿ ವರ್ಗವನ್ನು ತಕ್ಷಣವೇ ಅಮಾನತಿನಲ್ಲಿಟ್ಟು ಸಂಬಂಧಿಸಿದ ಘಟನೆ ಕುರಿತು ಸಮಗ್ರ ತನಿಖೆ ಮಾಡಬೇಕು. ಹಾಗೂ ಶಾಲಾ ಆವರಣದಲ್ಲಿ ಹಾಗೂ ಶಾಲಾ ಹಾಸ್ಟೆಲಗಳಲ್ಲಿ ಎಲ್ಲೆಡೆಯೂ ಸ್ವಚ್ಚತೆ ಹಾಗೂ ನೈರ್ಮಲ್ಯತೆ ಬಗ್ಗೆ ಕಾಳಜಿವಹಿಸಿ ಮಕ್ಕಳ ಶಿಕ್ಷಣದ ಜೋತೆ ಅವರ ಆರೋಗ್ಯವು ಅತಿ ಮುಖ್ಯವಾದದ್ದು ಅಂತಾ ಮನವರಿಕೆ ಮಾಡಿ ಮುಂದೆ ಈ ತರಹದ ಘಟನೆಗಳು ಮತ್ತೆಆಗದಂತೆ ನಿಗಾವಹಿಸಲು ಸೂಚಿಸಿದ್ದರು.ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕದ ಅದ್ಯಕ್ಷರಾದ ಸಂಜೀವ್ ಕಾಂಬಳೆ . ಸಾಗರ ನಿಂಗಾಗೊಳ (ಉಪಾಧ್ಯಕ್ಷರು.ರಾಜು ಕಾಂಬಳೆ . ಅಜಿತ ಲೋಕರೆ,ರಜನೀಕಾಂತ್ ಬಡಿಗೇರ. ಮೋಷಿನ್ ಪಟೇಲ್. ರಾಜು ಪೆಂಡಾರಿ, ಪಾಶ್ವನಾತಥ ಬಾಳಿಕಾಯಿ.ಜೋತೆ ಹಲವಾರು ಕರವೇ ಸೇವಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು