ವಿಷಯಕ್ಕೆ ಹೋಗಿ
ಚಿಕ್ಕೋಡಿ :ಚಿಕ್ಕೋಡಿ ಜಿಲ್ಲೆಗಾಗಿ ನಡೆದ ಧರಣಿ ಸತ್ಯಾಗ್ರಹ ಎರಡನೇ ದಿನವು ಯಶಸ್ವಿಗೊಳಿಸಿತು ಹೋರಾಟದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು, ಈ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಕಳೆದ ಮೂರು ದಶಕಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಹೋರಾಟ ಮಾಡುತ್ತಿದ್ದೇವೆ, ಆದರೆ ಚಿಕ್ಕೋಡಿ ವಿಭಾಗದ ಜನಪ್ರತಿನಿಧಿಗಳ ಇಚ್ಛಾ ಕೊರತೆಯ ಕಾರಣ ಜಿಲ್ಲೆ ಆಗದೇ ಇರುವುದು ದುರ್ದೈವದ ಸಂಗತಿಯಾಗಿದೆ. ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾದ ಬೆಳಗಾವಿ ಜಿಲ್ಲೆ ವಿಭಜನೆ ಆಗದೇ ಇರುವ ಕಾರಣ ಈ ಭಾಗದ ಜನರಿಗೆ ಎಲ್ಲ ತರದ ಅನಾನುಕೂಲತೆಗಳು ಹೆಚ್ಚಾಗಿವೆ. ಈ ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯಾಗಿ ಘೋಷಣೆ ಮಾಡಬೇಕು, ಇಲ್ಲವಾದರೆ ಕಿತ್ತೂರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿ ಉಗ್ರ ಹೋರಾಟ ಮಾಡಲಾಗುವು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು...ನಿವೃತ್ತ ಶಿಕ್ಷಕರಾದ ಚಂದ್ರಶೇಖರ ಅರಭಾವಿ ಅವರು ಮಾತನಾಡಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗುವುದರಿಂದ ರೈತರಿಗೆ, ವಾಪಾರಸ್ಥರಿಗೆ ಹಾಗೂ ಪದವೀಧರರಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದಂತಾಗಲಿದೆ ಹಾಗೂ ಅಥಣಿ-ಕಾಗವಾಡ ಭಾಗದ ಜನತೆಗೆ ಜಿಲ್ಲಾ ಕೇಂದ್ರ ಸಮೀಪಿಸುವುದರಿಂದ ಆರ್ಥಿಕ ಹೊರೆ ಕಡಿಮೆಯಗಲಿದೆ ಎಂದು ಹೇಳಿದರು..ಈ ಸಂಧರ್ಭದಲ್ಲಿ ಹೋರಾಟಗಾರರಾದ, ಪ್ರತಾಪಗೌಡ ಪಾಟೀಲ, ಅನಿಲ ನಾವಿ, ರಮೇಶ ಪಾಟೀಲ, ಮಹಾದೇವ ಬರ್ಗಾಲೆ, ಶ್ರೀಕಾಂತ ಅಸೋದೆ, ಶಿವಾಜಿ ಖಾಡೆ, ಸುರೇಶ ಮಾನೆ, ಮಲಕಾರಿ ಬಣ್ಣೆ, ಶ್ರೀಕಾಂತ ಖಾಡೆ, ದುರದುಂಡಿ ಬಡಿಗೇರ, ಮೋಹನ ಪಾಟೀಲ, ಶಂಕರ ಅವಡಖಾನ, ಸರದಾರ ಪಟೇಲ, ಕೇದಾರಿ ಬರ್ಗೆ, ಖಾನಪ್ಪಾ ಬಾಡ, ಶಿವಲಿಂಗ ವಗ್ಗೆ, ರಫೀಕ ಪಠಾಣ, ಸೇರಿದಂತೆ ನೂರಾರು ಜನ ಹೋರಾಟಗಾರರು ಉಪಸ್ಥಿತರಿದ್ದರು..
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು