ವಿಷಯಕ್ಕೆ ಹೋಗಿ
ಮುದ್ದೇಬಿಹಾಳ : ಪತ್ರಿಕಾ ವೃತ್ತಿ ಪವಿತ್ರವಾದದ್ದು. ಪತ್ರಕರ್ತರಾದವರು ಪತ್ರಿಕಾ ಧರ್ಮ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಸಂವಿಧಾನದ ನಾಲ್ಕನೆ ಅಂಗವಾಗಿರುವ ಈ ವೃತ್ತಿಗೆ ಸಾಕಷ್ಟು ಮಹತ್ವ ಇದ್ದು ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಬಾಗಲಕೋಟೆ, ಹುಬ್ಬಳ್ಳಿಯ ರೈತ ಮಿತ್ರ ಡಿಜಿಟಲ್ ಮಾಧ್ಯಮದ ಮುಖ್ಯಸ್ಥ ಯಮನಪ್ಪ ಕಂಬಾರ ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮುದ್ದೇಬಿಹಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ರೈತ ಮಿತ್ರ ಬಳಗದಿಂದ ಮುತ್ತಣ್ಣ ಒಡ್ಡೋಡಗಿ ಸರೂರ ಇವರ ನೇತೃತ್ವದಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ, ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಪತ್ರಕರ್ತರಾದವರಿಗೆ ಸಮಾಜ ಸೇವೆ ಮಾಡುವ ಸದವಕಾಶ ಸಾಕಷ್ಟು ಇರುತ್ತದೆ. ನಿಸ್ವಾರ್ಥದಿಂದ ಸೇವೆ ಮಾಡಿದರೆ ಅವರಿಗೂ, ಅವರು ಸಲ್ಲಿಸುವ ಪತ್ರಿಕಾ ಸೇವೆಗೂ ಸಾಕಷ್ಟು ಗೌರವ ಸಿಗುತ್ತದೆ. ಸಮಾಜ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಎನ್ನುವುದನ್ನು ಅರಿತುಕೊಂಡು ವೃತ್ತಿ ನಿಭಾಯಿಸಬೇಕು. ವಡವಡಗಿ ಅವರು ನನ್ನ ಪದವಿ ಕಾಲೇಜಿನ ಗುರುಗಳಾಗಿದ್ದು ಅವರನ್ನು ಸನ್ಮಾನಿಸುವ ಅವಕಾಶ ದೊರೆತದ್ದು ನನ್ನ ಸುದೈವ ಎಂದರು.ಕಾನಿಪ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಬಾಗವಾನ ಅವರು ಮಾತನಾಡಿ, ಪತ್ರಕರ್ತರು ಜವಾಬ್ಧಾರಿಯಿಂದ ನಡೆದುಕೊಂಡರೆ ಸಮಾಜವೂ ಅವರನ್ನು ಒಳ್ಳೇಯ ಮನೋಭಾವದಿಂದ ಸ್ವೀಕರಿಸುತ್ತದೆ. ಈ ಬಾರಿ ಸಂಘದ ನೇತೃತ್ವ ಹಿರಿಯರು ಮತ್ತು ಕಿರಿಯರ ಸಮ್ಮಿಶ್ರವಾಗಿದ್ದು ಭವಿಷ್ಯದಲ್ಲಿ ಉತ್ತಮ ಚಟುವಟಿಕೆ ನಡೆಸುವ ಗುರಿ ಹೊಂದಿದೆ. ಸಂಘದ ನೂತನ ಅಧ್ಯಕ್ಷ ಡಿ.ಬಿ.ವಡವಡಗಿ ಅವರು ಅನುಭವಿಗಳಾಗಿದ್ದು ರಾಜ್ಯಮಟ್ಟದ ಹುದ್ದೆ ಹೊಂದಿ ಸಾಧನೆ ಮಾಡಿದವರಾಗಿದ್ದಾರೆ. ಎಲ್ಲರೂ ಇವರನ್ನೇ ಅಧ್ಯಕ್ಷರನ್ನಾಗಿಸುವ ಒತ್ತಡ ಹೇರಿದ್ದರಿಂದ ಅನಿವಾರ್ಯವಾಗಿ ಸ್ಪರ್ಧಿಸಿದರು. ಎಲ್ಲರೂ ಸೇರಿ ಸರ್ಕಾರ ಮತ್ತು ಸಮಾಜದ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡೋಣ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾನಿಪ ಸಂಘದ ಅಧ್ಯಕ್ಷ ಡಿ.ಬಿ.ವಡವಡಗಿ ಅವರು ಮಾತನಾಡಿ, ಸನ್ಮಾನ ಜವಾಬ್ಧಾರಿಯನ್ನು ಹೆಚ್ಚಿಸಿದೆ. ಜೀವನ ಆಕಸ್ಮಿಗಳ ಆಗರವಾಗಿದೆ. ಯಾವ ಸಮಯ ಏನು ನಡೆಯುತ್ತದೆ ಅನ್ನೋದು ಗೊತ್ತಿರೋದಿಲ್ಲ. ಪತ್ರಕರ್ತರು ಪ್ರಾಮಾಣಿಕವಾಗಿ, ತಮ್ಮತನ ಬಿಟ್ಟು ಕೊಡದೆ ವೃತ್ತಿಗೆ ಗೌರವ ತಂದುಕೊಟ್ಟಲ್ಲಿ ರಾಜ್ಯಮಟ್ಟದ ಸಾಧನೆ ಮಾಡುವ ಅವಕಾಶ ಒದಗಿಬರುತ್ತದೆ. ನನ್ನ ಶಿಷ್ಯಬಳಗದಲ್ಲಿ ಒಬ್ಬರಾದ ಯಮನಪ್ಪ ಅವರು ಇದು ವಕೀಲರಾಗಿ, ಡಿಜಿಟಲ್ ಮಾಧ್ಯಮದ ಮುಖ್ಯಸ್ಥರಾಗಿ ಹೆಸರು ಗಳಿಸಿ್ರುವುದು ಶ್ಲಾಘನೀಯ ಬೆಳವಣಿಗೆ ಎಂದರು.ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಡಿ.ಬಿ.ವಡವಡಗಿ, ಪ್ರಧಾನ ಕಾರ್ಯದರ್ಶಿ ಎಚ್.ಆರ್.ಬಾಗವಾನ, ಉಪಾಧ್ಯಕ್ಷರಾದ ಬಸವರಾಜ ಹುಲಗಣ್ಣಿ, ಜಿ.ಎನ್.ಬಿರಗೊಂಡ(ಮುತ್ತು), ಖಜಾಂಚಿ ಎ.ಎಲ್.ಮುಲ್ಲಾ, ಕಾರ್ಯದರ್ಶಿಗಳಾದ ಲಾಡ್ಲೇಮಶ್ಯಾಕ ನದಾಫ, ಕಾಶಿನಾಥ ಬಿರಾದಾರ ಇವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗೆ ಗುಲಾಬಿ ಹೂವಿನ ಸಸಿ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು. ಉಪಸ್ಥಿತರಿದ್ದ ಸಂಘದ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.ಪತ್ರಕರ್ತರಾದ ನೂರೇನಬಿ ನದಾಫ, ಮುತ್ತು ವಡವಡಗಿ, ಸಿದ್ದು ಚಲವಾದಿ, ಸಾಗರ ಉಕ್ಕಲಿ, ಈರಯ್ಯ ಹಿರೇಮಠ, ಮಹಿಬೂಬ ಹಳ್ಳೂರ, ಮಹಾಂತೇಶ ನೂಲಿನವರ್, ರೈತ ಮಿತ್ರದ ಮುತ್ತಣ್ಣ ಒಡ್ಡೊಡಗಿ, ಮಹ್ಮದ ಮಕಾಸಿ ಇನ್ನಿತರರು ಉಪಸ್ಥಿತರಿದ್ದರು. ರವೀಂದ್ರ ನಂದೆಪ್ಪನವರ್ ಕಾರ್ಯಕ್ರಮ ನಿರ್ವಹಿಸಿದರು.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು