ವಿಷಯಕ್ಕೆ ಹೋಗಿ
ಚಿಕ್ಕೋಡಿ : ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕೋಡಿ ತಾಲೂಕು ಘಟಕದಿಂದ ಬೆಳಗಾವಿಯ ಗಡಿ ಭಾಗದಲ್ಲಿ ಪದೇ ಪದೇ ನಾಡದ್ರೋಹಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಎಂ ಇ ಎಸ್ ಗೂಂಡಾಗಳ ಮೇಲೆ ರೌಡಿ ಶೀಟರ್ ಕೇಸ್ ದಾಖಲು ಮಾಡಬೇಕೆಂದು ಚಿಕ್ಕೋಡಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಿರಂತರವಾಗಿ ಗಡಿ ಭಾಗದ ಬೆಳಗಾವಿಯಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತ ನಾಡದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಎಂ ಇ ಎಸ್ ನಾಯಕ ಶುಭಂ ಶೇಳಕೆ ವಿರುದ್ಧ ಗುಂಡಾ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಚಿಕ್ಕೋಡಿ ತಾಲೂಕಿನ ಕರವೇ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟಿಸಿ, ಶನಿವಾರ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಮೆರವಣಿಗೆ ನಡೆಸಿದ ಕರವೇ ಕಾರ್ಯಕರ್ತರು, ಕನ್ನಡ ನಾಡು-ನುಡಿ, ನೆಲ-ಜಲ ವಿಚಾರವಾಗಿ ಪದೇ ಪದೇ ಅವಹೇಳನಕಾರಿಯಾಗಿ ವರ್ತಿಸುತ್ತಿರುವ ಶುಭಂ ಶೇಳಕೆ ಮೇಲೆ ರೌಡಿ ಶೀಟರ್ ಕೇಸ್ ದಾಖಲಿಸಬೇಕು ಎಂದು ಮನವಿಪತ್ರ ಸಲ್ಲಿಸಿದರು. ಕರವೇ ಚಿಕ್ಕೋಡಿ ತಾಲೂಕಾ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ, ಗೂಂಡಾ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ವಿಳಂಬ ಏಕೆ? ಎಷ್ಟು ಜನ ಕನ್ನಡ ಪರ ಹೋರಾಟಗಾರರ ಮೇಲೆ ತಾವು ರೌಡಿ ಶೀಟ್ ಓಪನ್ ಮಾಡಿದ್ದೀರಿ ? ಈ ಎಲ್ಲ ಪ್ರಶ್ನೆಗಳಿಗೆ ಸಮಸ್ತ ಕನ್ನಡಿಗರಿಗೆ ತಾವು ಕೂಡಲೇ ಉತ್ತರ ಕೊಡಲೇಬೇಕು. ಎಂದು ಸರಕಾರಕ್ಕೆ ಪ್ರಶ್ನಿಸುತ್ತಾ, ಈ ಮನವಿಯ ಮೂಲಕ ಕರವೇ ಕಾರ್ಯಕರ್ತರು ಶುಭಂ ಶೇಳಕೆಯ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಮತ್ತು ಇವನ ವಿರುದ್ಧ ಯಾವ ಕ್ರಮ ಜರುಗಿಸುವಿರಿ ಎಂಬ ಬಗ್ಗೆ ಕನ್ನಡ ಪರ ಹೋರಾಟಗಾರರಿಗೆ ಉತ್ತರ ನೀಡಬೇಕೆಂದು ಖಾರವಾಗಿ ನುಡಿದರು. ಕರವೇ ತಾಲೂಕಾ ಗೌರವಾಧ್ಯಕ್ಷ ಚಂದ್ರಕಾಂತ ಹುಕ್ಕೇರಿ ಮಾತನಾಡಿ, ಕನ್ನಡ ಮತ್ತು ಮರಾಠಿಗರಲ್ಲಿ ದ್ವೇಷಭಾವನೆ ಮೂಡಿಸುತ್ತಿರುವ ನಾಡದ್ರೋಹಿ ಶುಭಂ ಶೇಳಕೆ ಕನ್ನಡ ನಾಡಿನಲ್ಲಿ ವಾಸಿಸಲು ಯೋಗ್ಯನಲ್ಲ, ಕನ್ನಡ ನೆಲ ಜಲ ಅನ್ನವನ್ನು ತಿಂದು ಮಾತೃ ಭೂಮಿಗೆ ದ್ರೋಹ ಮಾಡುವುದು ಸರಿಯಲ್ಲಾ, ಕೂಡಲೇ ಅವನ ಮೇಲೆ ಗುಂಡಾ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಅಪ್ಪಾಸಾಹೇಬ ಹಿರೆಕೋಡಿ, ರಫೀಕ ಪಠಾಣ, ಚಂದ್ರಶೇಖರ ಅರಭಾವಿ, ಶಂಕರ ಅವರಖಾನ, ಸಿದ್ಧರಾಮ ಕರಗಾವೆ, ಕಲ್ಮೇಶ್ವರ ಪಾಟೀಲ, ಭೀಮರಾವ್ ಮಡ್ಡೆ, ಸರ್ಜೇರಾವ್ ಕಟ್ಟಿ, ವಿಠ್ಠಲ ಮಾನೆ, ರಮೇಶ ಡಂಗೇರ ಮಾಳು ಕರೆಣ್ಣವರ, ಮಾರುತಿ ಮಾನಗಾವೆ, ಪ್ರವೀಣ ಪೂಜೇರಿ, ಸಂತೋಷ ಪೂಜೇರಿ, ದುಂಡಪ್ಪಾ ಚೌಗಲಾ, ಶ್ರೀಕಾಂತ ಅಸೋದೆ, ಮೋಹನ ಪಾಟೀಲ ಸೇರಿದಂತೆ ಹಲವಾರು ಜನ ಕನ್ನಡ ಪರ ಹೋರಾಟಗಾರರು ಉಪಸ್ಥಿತರಿದ್ದರು.
ಈ ಬ್ಲಾಗ್ನ ಜನಪ್ರಿಯ ಪೋಸ್ಟ್ಗಳು